Popular Posts

Tuesday, February 22, 2011

ರಂಗೋಲಿ ಸ್ಪರ್ಧೆ!!!

ಪ್ರಿಯತಮನ ಸ್ವಾಗತಿಸಲು
ಹಸಿರು ತೋರಣವ ಕಟ್ಟಿ
ಬಗೆ ಬಗೆ ಬಣ್ಣದ ಹೂಗಳನರಳಿಸಿ
ಗಂಗೆ, ತುಂಗೆ, ಕಾವೇರಿಯರನು
ಎಳೆ ಎಳೆಯಾಗಿ ಬಿಡಿಸಿ
ಚಿತ್ತಾರ ರಚಿಸಿದಳು ವಸುಂಧರೆ!

ನಲ್ಲೆಯ ಸಂಭ್ರಮಕೆ ನಾಚಿ
ಕೆಂಪಗಾದ ರವಿಯು
ನೆಚ್ಚಿನ ಭಂಟ ವರುಣನನು
ಪನ್ನೀರ ಮಳೆಗರೆಯಲು ಕೋರಿ
ನೀಲಗಗನದ ಹಾಸಿನ ಮೇಲೆ
ಬಿಡಿಸಿ ನಿಂತನು ಕಾಮನಬಿಲ್ಲು!!!

2 comments:

  1. ಮೇಡಂ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete