Popular Posts

Tuesday, April 5, 2011

ಯುಗಾದಿಯ ಸಂಭ್ರಮ!!!

ಮೂವು ಹೊಂಗೆಯ
ತಳಿರು ತೋರಣವ ಕಟ್ಟಿ
ತುಂಬೆಯ ಹೂವರಳಿಸಿ
ಚೈತ್ರ ಮಾಸಕೆ
ಹೊಸ ಮುನ್ನುಡಿ ಬರೆದನು ವಸಂತ!

ಶುಭ ಮುಂಜಾನೆಯಲಿ
ಪ್ರೀತಿಯ ಸಾಗರದಲೆಗಳಲಿ
ಮಿಂದು ತೇಲುತಿಹ ಹೃದಯಗಳೆರಡು
ಮಲ್ಲಿಗೆಯ ಮಾಲೆಗೆ ಕೊರಳನೊಡ್ಡಿ
ಅಡಿಯಿಟ್ಟವು ನವಜೀವನದ ಪಲ್ಲಂಗಕೆ!

ಹೊಂಗಿರಣದ ಸಿಹಿಸ್ಪರ್ಶಕೆ
ಪುಳಕಿತವಾಗಿಹ ಹಸಿರ ಬನದೆಡೆಯಿಂದ
ತೇಲಿಬಂತು ಕುಹೂ ಕುಹೂ ಇಂಚರ!
ಈ ರಸವಿಸ್ಮಯಕೆ ನಿಬ್ಬೆರಗಾದ ಕವಿಯು
ಅಂಕಿತ ಹಾಕಿದನು ಯುಗಾದಿಯ ಮುನ್ನುಡಿಗೆ!!!