ಮೂವು ಹೊಂಗೆಯ
ತಳಿರು ತೋರಣವ ಕಟ್ಟಿ
ತುಂಬೆಯ ಹೂವರಳಿಸಿ
ಚೈತ್ರ ಮಾಸಕೆ
ಹೊಸ ಮುನ್ನುಡಿ ಬರೆದನು ವಸಂತ!
ಶುಭ ಮುಂಜಾನೆಯಲಿ
ಪ್ರೀತಿಯ ಸಾಗರದಲೆಗಳಲಿ
ಮಿಂದು ತೇಲುತಿಹ ಹೃದಯಗಳೆರಡು
ಮಲ್ಲಿಗೆಯ ಮಾಲೆಗೆ ಕೊರಳನೊಡ್ಡಿ
ಅಡಿಯಿಟ್ಟವು ನವಜೀವನದ ಪಲ್ಲಂಗಕೆ!
ಹೊಂಗಿರಣದ ಸಿಹಿಸ್ಪರ್ಶಕೆ
ಪುಳಕಿತವಾಗಿಹ ಹಸಿರ ಬನದೆಡೆಯಿಂದ
ತೇಲಿಬಂತು ಕುಹೂ ಕುಹೂ ಇಂಚರ!
ಈ ರಸವಿಸ್ಮಯಕೆ ನಿಬ್ಬೆರಗಾದ ಕವಿಯು
ಅಂಕಿತ ಹಾಕಿದನು ಯುಗಾದಿಯ ಮುನ್ನುಡಿಗೆ!!!
ತಳಿರು ತೋರಣವ ಕಟ್ಟಿ
ತುಂಬೆಯ ಹೂವರಳಿಸಿ
ಚೈತ್ರ ಮಾಸಕೆ
ಹೊಸ ಮುನ್ನುಡಿ ಬರೆದನು ವಸಂತ!
ಶುಭ ಮುಂಜಾನೆಯಲಿ
ಪ್ರೀತಿಯ ಸಾಗರದಲೆಗಳಲಿ
ಮಿಂದು ತೇಲುತಿಹ ಹೃದಯಗಳೆರಡು
ಮಲ್ಲಿಗೆಯ ಮಾಲೆಗೆ ಕೊರಳನೊಡ್ಡಿ
ಅಡಿಯಿಟ್ಟವು ನವಜೀವನದ ಪಲ್ಲಂಗಕೆ!
ಹೊಂಗಿರಣದ ಸಿಹಿಸ್ಪರ್ಶಕೆ
ಪುಳಕಿತವಾಗಿಹ ಹಸಿರ ಬನದೆಡೆಯಿಂದ
ತೇಲಿಬಂತು ಕುಹೂ ಕುಹೂ ಇಂಚರ!
ಈ ರಸವಿಸ್ಮಯಕೆ ನಿಬ್ಬೆರಗಾದ ಕವಿಯು
ಅಂಕಿತ ಹಾಕಿದನು ಯುಗಾದಿಯ ಮುನ್ನುಡಿಗೆ!!!
ಮಲ್ಲಿಗೆಯ ಮಾಲೆಗೆ ಕೊರಳನೊಡ್ಡಿ..ಚೆ೦ದದ ಸಾಲುಗಳು.
ReplyDeleteನಿಮಗೂ ಯುಗಾದಿಯ ಸುಭಾಶಯಗಳು.
ಅನ೦ತ್
ಮಲ್ಲಿಗೆಯ ಮಾಲೆಗೆ ಕೊರಳನೊಡ್ಡಿ..ಚೆ೦ದದ ಸಾಲುಗಳು.
ReplyDeleteನಿಮಗೂ ಯುಗಾದಿಯ ಶುಭಾಶಯಗಳು.
ಅನ೦ತ್
ಸರ್, ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
ReplyDeleteಸತ್ಯಪ್ರಸಾದ್...
ReplyDeleteನಿಮಗೂ..
ನಿಮ್ಮ ಮನೆಯವರಿಗೆಲ್ಲರಿಗೂ ಯುಗಾದಿಹಬ್ಬದ ಶುಭಾಶಯಗಳು..
ಸೊಗಸಾದ ಕವನಕ್ಕೂ ಅಭಿನಂದನೆಗಳು...
ಪ್ರೀತಿಯ ಪ್ರಕಾಶ್, ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
ReplyDelete