Popular Posts
-
ಮೂವು ಹೊಂಗೆಯ ತಳಿರು ತೋರಣವ ಕಟ್ಟಿ ತುಂಬೆಯ ಹೂವರಳಿಸಿ ಚೈತ್ರ ಮಾಸಕೆ ಹೊಸ ಮುನ್ನುಡಿ ಬರೆದನು ವಸಂತ! ಶುಭ ಮುಂಜ...
-
(ಮೊನ್ನೆ ಸೂರ್ಯನಿಂದ ಬಂದ ಪತ್ರಕ್ಕೆ ಇದೋ ಇಲ್ಲಿದೆ ವಸುಂಧರೆಯ ಉತ್ತರ!) ವಾಹ್! ಎಂತಹ ಅಮರಪ್ರೇಮಿಯೋ ಚಿನ್ನು ನೀನು! ನಂಗೊತ್ತಿತ್ತು ನೀನೊಬ್ಬ ಮಹಾ ರಸಿಕ ಜೊತೆಗೆ ಸ್...
-
ಕಡಿದಾದ ಬೆಟ್ಟಗಳ ಮೈದುಂಬಿ ಹಬ್ಬಿಹ ದಟ್ಟ ಕಾನನದ ಹಸಿರು ಚಪ್ಪರದೊಳಗೆ ನೆತ್ತಿಯ ಮೇಲಿಂದ ನೇಸರನು ಕಿರಣದ ಹೆಜ್ಜೆಗ...
-
ವಸು ಡಾರ್ಲಿಂಗ್, ನಿನಗೊಂದು surprise ಕೊಡಲೆಂದು ಈ ಪ್ರೇಮ ಪತ್ರ. ಹಗಲೆಲ್ಲಾ ನಿನ್ನನ್ನು ಲಲ್ಲೆಗರೆಯುತ್ತಾ, ರಮಿಸುತ...
-
ಪ್ರಿಯತಮನ ಸ್ವಾಗತಿಸಲು ಹಸಿರು ತೋರಣವ ಕಟ್ಟಿ ಬಗೆ ಬಗೆ ಬಣ್ಣದ ಹೂಗಳನರಳಿಸಿ ಗಂಗೆ, ತುಂಗೆ, ಕಾವೇರಿಯರನು ಎಳೆ ಎಳೆಯಾಗಿ ಬಿಡಿಸಿ ಚಿತ್ತಾರ ರಚಿಸಿದಳು ವಸುಂಧರೆ! ನ...
Wednesday, December 29, 2010
ಆಹ್, ಎಂತಹ ಹೆಮ್ಮೆಯ ಕ್ಷಣಗಳಿವು!!!!
ಬರೀ ಹಗರಣಗಳು, ವಂಚನೆಯ ಸುದ್ದಿಗಳನ್ನು ಓದಿ ಓದಿ ಬೇಸರಗೊಂಡಿದ್ದ ನಮಗೆಲ್ಲಾ ಅಪರೂಪಕ್ಕೆಂಬಂತೆ ಸಂತೋಷದ ಕ್ಷಣಗಳು ಎದುರಾಗಿವೆ! ಈ ವರ್ಷದ ಶ್ರೇಷ್ಠ ಭಾರತೀಯ ಕ್ರೀಡಾಪಟುವಿನ ಆಯ್ಕೆ ಮಾಧ್ಯಮಗಳಿಗೆ ತುಸು ತ್ರಾಸದಾಯಕವಾಗಿಬಿಟ್ಟಿದೆ!!! ಯಾಕೆಂದರೆ ಆ ಪಟ್ಟಿ ಬಹು ದೊಡ್ಡದಿದೆ!!! ಸಚಿನ್, ಸೈನಾ, ಸೋಮ್ ದೇವ್, ವಿ.ಆನಂದ್, ಅಡ್ವಾಣಿ, ಅಶ್ವಿನಿ, ವಿಜೇಂದರ್, ಸುಶಿಲ್ ಕುಮಾರ್ ಹೀಗೆ ಬೆಳೆಯುತ್ತಲೇ ಇದೆ. ಇವರೆಲ್ಲರ ಜೊತೆಗೆ ಗ್ರೇಟ್ ವಾಲ್ ಖ್ಯಾತಿಯ ನಮ್ಮ ದ್ರಾವಿಡ್ ಈಗತಾನೆ 12000 ಸಾವಿರ ರನ್ ದಾಟಿ, ಮತ್ತೊಂದು ಮಹತ್ವದ ಮೈಲಿಗಲ್ಲಾದ 200 ಕ್ಯಾಚ್ ಗಳ ಸನಿಹ ಬಂದಿದ್ದಾರೆ. ಯಾರೇ ಆಯ್ಕೆಯಾಗಲಿ, ಆದರೆ ಇದಂತೂ ನಮಗೆ ಅತ್ಯಂತ ಹೆಮ್ಮೆಯ, ಅತೀವ ಸಂತೋಷದ, ಬಲು ಅಪರೂಪದ ಕ್ಷಣಗಳು ಎಂಬುದರಲ್ಲಿ ಎರಡುಮಾತಿಲ್ಲ. ಹೌದಲ್ಲವೇ???
Subscribe to:
Post Comments (Atom)
No comments:
Post a Comment