Popular Posts
-
ಮೂವು ಹೊಂಗೆಯ ತಳಿರು ತೋರಣವ ಕಟ್ಟಿ ತುಂಬೆಯ ಹೂವರಳಿಸಿ ಚೈತ್ರ ಮಾಸಕೆ ಹೊಸ ಮುನ್ನುಡಿ ಬರೆದನು ವಸಂತ! ಶುಭ ಮುಂಜ...
-
(ಮೊನ್ನೆ ಸೂರ್ಯನಿಂದ ಬಂದ ಪತ್ರಕ್ಕೆ ಇದೋ ಇಲ್ಲಿದೆ ವಸುಂಧರೆಯ ಉತ್ತರ!) ವಾಹ್! ಎಂತಹ ಅಮರಪ್ರೇಮಿಯೋ ಚಿನ್ನು ನೀನು! ನಂಗೊತ್ತಿತ್ತು ನೀನೊಬ್ಬ ಮಹಾ ರಸಿಕ ಜೊತೆಗೆ ಸ್...
-
ಪ್ರಿಯತಮನ ಸ್ವಾಗತಿಸಲು ಹಸಿರು ತೋರಣವ ಕಟ್ಟಿ ಬಗೆ ಬಗೆ ಬಣ್ಣದ ಹೂಗಳನರಳಿಸಿ ಗಂಗೆ, ತುಂಗೆ, ಕಾವೇರಿಯರನು ಎಳೆ ಎಳೆಯಾಗಿ ಬಿಡಿಸಿ ಚಿತ್ತಾರ ರಚಿಸಿದಳು ವಸುಂಧರೆ! ನ...
-
ವಸು ಡಾರ್ಲಿಂಗ್, ನಿನಗೊಂದು surprise ಕೊಡಲೆಂದು ಈ ಪ್ರೇಮ ಪತ್ರ. ಹಗಲೆಲ್ಲಾ ನಿನ್ನನ್ನು ಲಲ್ಲೆಗರೆಯುತ್ತಾ, ರಮಿಸುತ...
-
ಕಡಿದಾದ ಬೆಟ್ಟಗಳ ಮೈದುಂಬಿ ಹಬ್ಬಿಹ ದಟ್ಟ ಕಾನನದ ಹಸಿರು ಚಪ್ಪರದೊಳಗೆ ನೆತ್ತಿಯ ಮೇಲಿಂದ ನೇಸರನು ಕಿರಣದ ಹೆಜ್ಜೆಗ...
Thursday, December 30, 2010
ಆತ್ಮೀಯ ಕಲಾಭಿಮಾನಿಗಳೇ ಯಾಕೆ ಹೀಗಾಗಿದೆ????
ಮೆಲ್ಲುಸಿರೆ ಸವಿಗಾನ, ದೋಣಿ ಸಾಗಲಿ ಮುಂದೆ ಹೋಗಲಿ, ಇವಳು ಯಾರು ಬಲ್ಲೆಯೇನು ಇತ್ಯಾದಿ ಹೃದಯಸ್ಪರ್ಶಿ ಹಾಡುಗಳಿಂದ ನಮ್ಮ ಮನಸೂರೆಗೊಂಡಿದ್ದ ನಮ್ಮ ಕನ್ನಡ ಚಿತ್ರರಂಗಕ್ಕೆ ಈಗ ಏನಾಗಿದೆ??? ಹಳೆ ಪಾತ್ರೆ ಹಳೆ ಕಬ್ಬಿಣ, ಹೊಡಿ ಮಗ ಹೊಡಿ ಮಗ, ಕೆಂಚಾಲೋ ಮಂಚಾಲೋ ಜೊತೆಗೆ ಮಚ್ಚು ಲಾಂಗುಗಳನ್ನೂ ಹಾಡುಗಳಲ್ಲಿ ತುರುಕುತ್ತಿರುವ ಇವರಿಗೆಲ್ಲಾ ಏನಾಗಿದೆ? ಬರೀ ಹಣ ಶಿಳ್ಳೆಗಳಷ್ಟೇ ಮುಖ್ಯವೇ? ಕಲಾವಿದರಾಗಿ ಈ ನಾಡಿನ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕಾದ ಮಹತ್ವದ ಜವಾಬ್ದಾರಿಯನ್ನು ಇವರುಗಳು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಕ್ಷಮಿಸಿ ನಾನು ಇಂದಿನ ಎಲ್ಲ ಚಿತ್ರಗಳನ್ನೂ ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ಮುಂಗಾರು ಮಳೆಯ ಹಾಡುಗಳು ಎಲ್ಲರನ್ನು ರಂಜಿಸಿದ್ದು ನನ್ನ ನೆನಪಿನಲ್ಲಿ ಹಸಿರಾಗಿದೆ.ಈ ಕೀಳು ಅಭಿರುಚಿಯ ಹಾಡುಗಳಿಗೆ ಕೊನೆ ಎಂದು ಎಂಬುದಷ್ಟೇ ನನ್ನ ಅಳಲು. ದಯವಿಟ್ಟು ತಮ್ಮ ಮುಕ್ತ ಅಭಿಪ್ರಾಯ ತಿಳಿಸಿರಿ.
Subscribe to:
Post Comments (Atom)
No comments:
Post a Comment